Posted by: sundaranadu on: November 6, 2009
Posted by: sundaranadu on: October 26, 2009
ನಿನ್ನೊಡನೆ
ಮಾತಾಡಲು
ಗುದ್ದಾಡಲು
ಮುದ್ದಾಡಲು
ಬಯಸುತಿದೆ ಮನಸು
ತೋರದಿರು ಮುನಿಸು
ಮರದಂತೆ ನೀನು
ಪಾದದಡಿಯ ಬಳ್ಳಿ ನಾನು
ನಿನ್ನ ನೋಡುತಲೇ
ಹಬ್ಬುವೆನು
ನಿನ್ನ ತೋಳ್ತೆಕ್ಕೆಯಲಿ
ಉಬ್ಬುವೆನು
ನನ್ನ ಉಸಿರಿಂದು
ನಿನ್ನ ಕೈಯಲ್ಲಿ
ನೀನಿಲ್ಲದಿರೆ
ನಾನೆಲ್ಲಿ
Posted by: sundaranadu on: October 9, 2009
ಹೇ ಸಖಿ
ನೋಡುತಲಿದ್ದೆ
ಅನುದಿನವೂ, ಅನುಕ್ಷಣವೂ
ಅನುರಾಗವು
ಎಂದೋ ಮೊಳೆದಿತ್ತು
ನನ್ನ ಕಣ್ಣೋಟವೂ
ನಿನಗೂ ತಿಳಿದಿತ್ತು
ಮುಷ್ಟಿ ಗಾತ್ರದ ಹೃದಯದ
ತುಂಬೆಲ್ಲ ನೀನಿದ್ದೆ
ಅದಾಗಿತ್ತು
ನಿನ್ನದೆ ಅರಮನೆ
ನನ್ನದೇ ಪ್ರೀತಿಯ
ತಂಗಾಳಿ ಬೀಸುತಲಿದ್ದೆ
ನಿನ್ನಯ ಮನ ತಣಿಯಲು
ಕಾಣದ ಕೈಯೊಂದು
ಕಾಡುತಲಿತ್ತು
ನಮ್ಮಯ ಅನುದಿನದ ಪ್ರೀತಿಯ
ನನ್ನ ಪ್ರೀತಿಯ ತಂಗಾಳಿಗೆ
ವಿಷ ಉಣಿಸಿ
ಪ್ರೀತಿಯರಮನೆಯ ಬರಿದು ಮಾಡಿತು
ಬದುಕು ಮಸಣವಾಯಿತು ಇಂದು
Posted by: sundaranadu on: October 9, 2009
ಕತ್ತಲೆಯೊಳು ಮುಳುಗುತಿಹುದು
ಈ ಜಗವ ಬೆಳಗಿದ ಸೂರ್ಯ
ಬೆಳದಿಂಗಳ ಹುಣ್ಣಿಮೆಯೂ
ಇನ್ನಿಲ್ಲ
ಅಮಾವಾಸ್ಯೆ, ಎಲ್ಲೆಲ್ಲೂ ಆವರಿಸಿದೆ
ಬರ-ನೋವು-ಸಾವಿನ
ಕರಿನೆರಳಿನ ಅಟ್ಟಹಾಸ
ಎಲ್ಲರೆದೆಯಲ್ಲು ಪ್ರೀತಿ, ಜ್ಞಾನ
ಕರುಣೆ ತುಂಬುವವರೆಗೂ
ಕಳೆಯದು ಈ ಇರುಳು
Posted by: sundaranadu on: August 16, 2009
ಕೆನ್ನೈದಿಲೆಯ ಹುಡಿ ಮಾಡಿ
ಚಂದ್ರನ ಬೆಳದಿಂಗಳ ಹಾಲ ಮಾಡಿ
ಕಲಸಿ ಮಾಡಿದ ಮೊಗ
ಕಡು ಅನ್ಧಕಾರದಲು
ಮಿನುಗುವುದು ಜಗ-ಮಘ
ಜಿಂಕೆಗಳ ಕೊಂದು
ಕಣ್ಣಿಟ್ಟನೊ ಬ್ರಹ್ಮ
ಈ ಸೌಂದರ್ಯಕೆ
ಅಲ್ಲಲ್ಲಿ ಸುಳಿಯುವ
ಹೂವ ಮುಂಗುರುಳು
ಹಂಸಗಳ ವಧೆ ಮಾಡಿ
ರೆಕ್ಕೆಗಳ ಕೊಯ್ದು ತಂದು
ಮಾಡಿದನೆ ಬ್ರಹ್ಮ
ಚೆಲುವೆಯ ಕಣ್ರೆಪ್ಪೆಗಳ
ಹೂವ ಮಕರಂಧವನೆಲ್ಲ
ಕೂಡಿಸಿ
ಹಾಲ ನೊರೆಯಿಂದ ಮುಳುಗಿಸಿ
ಹೆಣೆಯಿತೇ ಬೊಮ್ಮನ ಕೈಗಳು
ಸವಿಯ ಚೆನ್ದುಟಿಯ
ಹಾಲ ಕೊಳದಿ ಬೆಳೆದ
ಕೆಂಪು ಕಮಲವ ಆಯ್ದು ತಂದು
ಜೇನು ಗಂಧಗಳ ಬೆರೆಸಿ
ಅರೆದು ಮಾಡಿದನೆ
ಸೌಗಂಧದ ಚೆಲುವ ಮೈ ಸಿರಿಯ
ಈ ಚೆಲುವೆ
ಕೈ ಯಾಡುವೆಡೆ
ಬಿರುಗಾಳಿ ತಂಗಾಳಿ ಯಾಗುವುದು
ಇವಳು ನಡೆದಾಡು ವೆಡೆ
ಮರುಭೂಮಿ ಹಸಿರು ಕಾನನವಾಗುವುದು
ನಿನ್ನ ಸೌಂದರ್ಯಕೆ
ಪದಗಳೇ ನಿಲುಕವು
ಹಾಡಿ ಹೊಗಳಲೆಂದರೆ
ನಿನ್ನ ನೋಡುತಲೇ
ಎಲ್ಲ ಮರೆವವು
ಹೇಳೆ ಚೆಲುವೆ
ನಿನ್ನ ವರ್ಣಿಸೋ ರಸಿಕನಾರು?
ನಿನ್ನ ಸೌಂದರ್ಯಕೆ
ಸಿಲುಕುವ ಪದಗಳಾವು
Posted by: sundaranadu on: July 21, 2009
Posted by: sundaranadu on: June 28, 2009
ನೂರು ಊರು ಸುತ್ತಿದರೂ
Posted by: sundaranadu on: June 23, 2009
ಅಂಗಳದಲಿ ತಿಂಗಳು ಇಳಿದರು
ಕಾಣಲಿಲ್ಲ ನಿನ್ನ ಕಂಗಳು
ನಿನ್ನ ವಿರಹದಲ್ಲಿಯೇ
ಬರೆದು ಬರೆದು
ಸೋತವು ನನ್ನ ಕೈಗಳು
ಹತ್ತಾರು ಪ್ರೇಮ ಪುಸ್ತಕಗಳ
ನೂರೆಂಟು ಸಾಲುಗಳ ಹೆಕ್ಕಿ ತಂದೆ
ಅಕ್ಕರೆಯಲಿ ಅಕ್ಷರವ ಜೋಡಿಸುತ
ಬಳಲಿದೆ, ಬಾಡಿ ಬೆಂಡಾದೆ
ವಿರಹಗೀತೆ ಪ್ರೇಮಗೀತೆ ಆಗದೆ
ಉಳಿದೋಯಿತು, ಹರಿದು ಕಡಲಾಯಿತು
ನೂರಾರು ಪ್ರೇಮಿಗಳ ಕಂಡು
ಮಾತಾಡಿಸಿದೆ, ಕೇಳಿ ತಿಳಿದೆ
ಹೇಗೆಂದು ನಿನ್ನ ಒಲಿಸುವುದು
ಕಥೆ, ಕವನ, ಕಾವ್ಯ
ಓದುವುದು ಬಿಟ್ಟೆ, ಸುಟ್ಟೆ
ನೀನಿಲ್ಲದೇ ಕವಿತೆಗಳೆಲ್ಲ ಜಾಳಾದವು
ಕನಸಲ್ಲು ಕಣ್ಣು ನೀರಾದವು
Posted by: sundaranadu on: April 10, 2009
ಬಾಡಿಗೆಗೊಂದು ಮನೆ ಬೇಕಾಗಿದೆ
ಎಂದೆನ್ನಿಸಿದ ಕೂಡಲೇ
ಬೀದಿ ಬೀದಿಯಲಿ ಅಲೆದಾಡಿದೆ
ಶನಿವಾರ-ಭಾನುವಾರಗಳು
ಹತ್ತು ಹಲವಾದವು
‘ಬ್ರಹ್ಮಚಾರಿಗಳಿಗೆ ಮನೆಯಿದೆ’
ಎಂಬ ಬೋರ್ಡ್
ಕಾಣಿಸದೆ ನಿರಾಸೆಯಾದೆ
ಮನೆ ಬೇಕೆಂದರೆ
ಅದಕ್ಕೊಬ್ಬ ಬ್ರೋಕರ್ ಇರಬೇಕು
ಅವನೇಳಿದ ಹಾಗೆ ನಡೀಬೇಕು
ಸರಿ, ಅವನನ್ನ ಹುಡುಕಿದೆ
‘ಮನೆ ತೋರೋ ಮಹಾರಾಯ’
ಎಂದು ಅವನ ಹೊಗಳಿದೆ
ನನ್ನ ಬರಿಗಣ್ನೆಗೆ ಕಾಣಿಸದ
ಎಲ್ಲಿಯೂ ಬೋರ್ಡ್ ತಗುಲಿ ಹಾಕದ
ಹತ್ತಾರು ಮನೆಗಳ
ತೋರಿದ ಕ್ಷಣದಲಿ
ಒನ್ದೊನ್ದಕು ಒಂದೊಂದು ಕಂಡೀಶನ್
ಒಂದೊಂದು ರೇಟು
ಮೂರು ಸಾವಿರಕೆ ಸಿಂಗಲ್ ರೂಮು
ಆರಕ್ಕೆ ಕಡಿಮೆಯಿಲ್ಲ ಡಬಲ್ ಬೆಡ್ರೂಮಿನ ಮನೆಯು
ಒಂದು ತಿಂಗಳ ಬಾಡಿಗೆಯ
ಹಣ ಕೊಡಬೇಕು ನನಗೆ
ಯಾವ ತೊಂದರೆ ಇಲ್ಲದೆ
ಕರಾರು ಮಾಡಿಸಿ ಮನೆ ಕೊಡಿಸುವೆ ನಿಮಗೆ
ಎಂದು ರೇಟು ಹೇಳಿದ ‘ಮಹಾರಾಯ’
ತಕ್ಕ ಮನೆಯೇನೋ ಸಿಕ್ಕಿತು
ಪಕ್ಕದಲ್ಲಿಯೆ ಪಾರ್ಕು-ಗೀಕು
ಎಲ್ಲ ಇದ್ದು ಮನಕೀಗ ಶಾಂತಿ ಇರದಾಗಿದೆ
ಮಾಲೀಕರ ಮನೆಯಲ್ಲಿ ದಿನ ರಾದ್ಧಾಂತ ನಡೆದಿದೆ
ಬೇರೊಂದು ಮನೆಯ ಹೊಸದಾಗಿ
ನಾ ಹುಡುಕಬೇಕಾಗಿದೆ
Posted by: sundaranadu on: March 25, 2009
Ellarigu Ugadi Habbada mattu hosa varshada shubhashayagalu
ಅಭಿಪ್ರಾಯಗಳು