1.
ಜೂನ್ 8, 2008 ರಂದು ‘ವಿಜಯ ಕರ್ನಾಟಕ’ ಪ್ರಕಟಿಸಿದ ಡಾ. ಸತ್ಯನಾರಾಯಣ ಭಟ್. ಪೀ. ಅವರ ‘ವಿಷ
ಚಿಕೆತ್ಸೆಯ ಮಹಾತ್ಮ-ಮಂಗರಸ’ ಲೇಖನ ಅತ್ಯದ್ಭುತವಾಗಿತ್ತು. ಅದರಲ್ಲಿ ಆಳರಸನೊಬ್ಬ ಪ್ರಪ್ರಥಮವಾಗಿ
ಕನ್ನಡದಲ್ಲಿ ವಿಷ ಚಿಕೆತ್ಸೆಯನ್ನು ವಿವರಿಸಿದನೆಂಬುದನ್ನು ಓದಿಯೆ ಆಶ್ಚರ್ಯ, ಆನಂದ ಮತ್ತು ಹೆಮ್ಮೆಯಾಯಿತು.
ಈಗಿನಂತೆ ಆಗ ಆಸ್ಪತ್ರೆಗಳಾಗಲಿ, ದೊಡ್ಡ ವೈದ್ಯಕೀಯ ಸೌಲಭ್ಯಗಳು ಇರಲಿಲ್ಲ. ಜ್ವರ ಬಂದರೆ ನೂರೆಂಟು
ಔಷಧ ಪಡೆಯುವ ನಾವು, ನಮ್ಮ ದೇಹದಲ್ಲಿ ರೋಗ ನಿರೋಧಕತೆಯನ್ನೇ ಕಳೆದುಕೊಂಡಿದ್ದೇವೆ. ಅನ್ಥದ್ದರಲ್ಲಿ
ವಿಷಪೂರಿತ ಹಾವು, ಚೇಳು ಕಡಿದರೆ ಲಬ ಲಬ ಬಾಯೀ ಬಡಿದುಕೊಳ್ಳೋದೇ. ಆಸ್ಪತ್ರೆಗೆ ಓಡೋದರಲ್ಲಿ
ಪ್ರಾಣಾನು ಓಡಿರುತ್ತೆ. ಇಂತಹ ಸಂದರ್ಭದಲ್ಲಿ ‘ಮಂಗರಸ’ನ ಅಸಾಮಾನ್ಯ ತಿಳುವಳಿಕೆಯ ಸಾಮಾನ್ಯ ಔಷಧಿ
ಮತ್ತು ವಿಧಾನಗಳು ಅಪಾಯಕ್ಕೀಡದವರ ಪ್ರಾಣ ಉಳಿಸುವನ್ಥವು.
ಅವನ ಸಾಹಿತ್ಯದಲ್ಲಿ ಅಲಂಕಾರವಿದೆ, ಜನಹಿತವಿದೆ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಮನಶಾಸ್ತ್ರ ಎಲ್ಲವೂ ಇದೆ
ಅಂದಮೇಲೆ, ಅವನ ಪಾಂಡಿತ್ಯ ಮೆಚ್ಚಲೇಬೇಕು. ‘ಮಂಗರಸ’ನ ಕೃತಿ ‘ಖಗೇನ್ದ್ರ ಮಣಿ ದರ್ಪಣ’-ಇಂಥ
ಲೇಖನವನ್ನು ಪ್ರಸ್ತುತಪಡಿಸಿದ ಡಾ. ಸತ್ಯನಾರಾಯಣ ಭಟ್ ಅವರಿಗೂ, ಪ್ರಕಟಿಸಿದ
‘ವಿಜಯ ಕರ್ನಾಟಕ’ಕ್ಕೂ ಅನಂತ ಧನ್ಯವಾದಗಳು.
ಅಭಿಪ್ರಾಯಗಳು