ಅಭಿಮಾನಿ

Archive for May 2008

ಮಳೆಗಾಲದ ಒಂದು ಮುಸ್ಸಂಜೆ

Posted by: sundaranadu on: May 26, 2008

 ಮಳೆಗಾಲದ ಒಂದು ಮುಸ್ಸಂಜೆ ಅದು. ಮಳೆ ಆಗ ತಾನೇ ಮುಗಿದಿತ್ತು. ಸಣ್ಣಗೆ ತಣ್ಣನೆ ಗಾಳಿ 
ಬೀಸುತಿತ್ತು. ಆ ಮಧುರವಾದ, ತಣ್ಣನೆ ಸಂಜೆಯಲಿ ನನ್ನವಳ ನೆನಪು ಕಾಡುತಿತ್ತು. ಮರದ 

ಹನಿಗಳು ನಿಲ್ಲುವಂತಾಗಿದ್ದರು, ನೆನಪಿನ ಹನಿಗಳು ನಿಂತಿರಲಿಲ್ಲ.
 
ನಿನ್ನ ಹೆಸರು ನೆನೇದರೇನೆ
ಸುರಿವುದಲ್ಲ ಪ್ರೀತಿಯ ಸೋನೆ
ಈ ತನ್ಗಾಳಿಯಲು…..
ನಿನ್ನ ನೆನಪೆನೇ
 
ಅವಳ ಹೆಸರು ಬೇಡ. ಆ ಹೆಸರಲ್ಲೆ ಏನೋ ಇದೆ. ನೆನೆದಷ್ಟು ದಟ್ಟ. ಆದರೆ ನೆನೆಯೋದಕ್ಕೆ 
ಒಂದು ಸಲವಾದರು ಮರೀಬೇಕಲ್ಲ. ಅವಳ ಹೆಸರು ಹಾಗೇನೆ.
 
ಮರೆಯಬಾರದೇ ಮನವು ನಿನ್ನನು
ಮರೆತೆಯೆನ್ದರೆ ಅಯ್ಯೋ ಮರೆವೆ ನನ್ನನು
ಹೇಳೆ ಚೆಲುವೆ……..
ಮರೆಯದೇ ನೀ ಕಾಡುತಲಿರುವೆ
 
ಮನೆಬಿಟ್ಟು ಹಾಗೆ ಸುತ್ತಾಡಿಕೊಂಡು ಬರೋಣೇವೆಂದು ಪಾರ್ಕಿನ ಕಡೆಗೆ ಹೊರಟೆ. ಎಲೆಗಳ 
ಮೇಲೆ ಕೂತ ಮಳೆ ಹನಿಗಳು, ಅವಳ ಜಪ ಮಾಡುತ್ತಿರುವಂತೆ ಕಂಡವು. ನನಗೆ ಅದನ್ನು 
ಸಹಿಸಲಾಗದೆ, ಅವುಗಳನ್ನು ಮೆಲ್ಲಗೆ ಅಲ್ಲಾಡಿಸಿದೆ. ಎಲೆಯ ಮೇಲಿದ್ದ ಹನಿಗಳೆಲ್ಲ ಅವಳ 
ಹೆಸರನ್ನೇ ಹೇಳುತ್ತಾ ಉದುರಿದವು. ಆಗ ಮಾತ್ರ ಏನನ್ನೋ ಕಳೆದುಕೊಂಡಂತೆ ಅನಿಸಿತು.
 
ನಿನ್ನ ಹೆಸರನ್ನೇ ಹೇಳುತಲಿದ್ದವು
ಸಾಲು ಮಳೆ ಹನಿ
ನಿನ್ನ ಜಪವ ಮಾಡುತ
ಹೇಳಿ ಧನ್ಯನೆನ್ನುತ
 
 ಭಾರವಾದ ಹೆಜ್ಜೆಗಳೊಡನೆ ಹೋಗಿ ಪಾರ್ಕಿನ ಬೆಂಚಿನ ಮೇಲೆ ಕುಳಿತೆ. ಮಳೆಗೆ ತೊಯ್ದ 
ಹಕ್ಕಿಗಳು ತಮ್ಮ ರೆಕ್ಕೆಗಳನ್ನು ಶುಭ್ರ ಮಾಡಿಕೊಳ್ಳುತ್ತಿದ್ದವು. ಅಳಿಲು ಅತ್ತಿಂದಿತ್ತ ಏನೋ 
ಹುಡುಕುತ್ತಿತ್ತು. ಹೂಗಳು ಮಳೆ ಭಾರಕ್ಕೆ ಹಾಗೆ ಬಾಗಿದ್ದವು. ನಾನು ಹೀಗೆ ಏಕೆ ಎಂದು ಕೇಳಿದೆ.
 ಆಗ…
 
ನಿನ್ನ ಪ್ರೀತಿಯ ವರ್ಷಧಾರೆಯ
ನಾ ತಡೆವುದು ಹೇಗೆನ್ದಿತು ಹೂ
ಪ್ರೀತಿಯಿಲ್ಲದೇ ಬೇಯುತಲಿದ್ದ
ಅಳಿಲು ಸೂಸಿತು ಅಕ್ಕರೆಯ ನಗುವು
 
ಆಗ ಮತ್ತೆ ಮನಸ್ಸಲ್ಲಿ ಗಾಢವಾಗಿ ಕಾಡಲಾರಮ್ಭಿಸಿತು ಅವಳು ಮತ್ತು ಅವಳ ಪ್ರೀತಿ. 
ಎಂದು ನೋಡುವೆನು ಅವಳನ್ನು ಎನ್ನುತಾ ಮನಸ್ಸು ಲೆಕ್ಕಾಚರದಲ್ಲಿ ತೊಡಗಿತು. ಮೋಡದ 
ಯಾವುದೋ ತೀರದಲ್ಲಿ ಮಿಂಚು ಕಾಣಿಸಿಕೊಂಡಿತು. ಮತ್ತೊಮ್ಮೆ ಮಳೆ ಆಗುವುದು ಎಂದು-
-ಕೊಂಡು, ಮನೆಗೆ ಹೊರಡಲು ಅನುವಾದೆ. ಆಗ ನನ್ನ ಹುಡುಗಿ ಕಾಣಿಸಿಕೊಳ್ಳಲು, ಮತ್ತೆ 
ಶುರುವಾಯಿತು ಪ್ರೀತಿಯ ಮಳೆ.

ಮತ್ತೆ ಸುರಿವುದೆನ್ದು ನಿನ್ನ ಪ್ರೇಮಧಾರೆ
ಮನವು ಎಣಿಸುತಿರಲು
ಮಿಂಚಾಗಿ ಬಳಿ ಬಂದೆ
ಪ್ರೀತಿಯ ಮಳೆ ಕರೆದೆ

ವೇದ ಸುಳ್ಳಾದರು ಗಾದೆ ಸುಳ್ಳಾಗದು.
ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ. 
ಕೈ ಕೆಸರಾದರೆ ಬಾಯಿ ಮೊಸರು.
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ಮಾತು ಬೆಳ್ಳಿ, ಮೌನ ಬಂಗಾರ.
ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
ಮನೆಗೆ ಮಾರಿ, ಊರಿಗೆ ಉಪಕಾರಿ.
 ಆಳಾಗಬಲ್ಲವನು ಅರಸನಾಗಬಲ್ಲ.
 ಊರಿಗೆ ದೊರೆ ಆದರೂ ತಾಯಿಗೆ ಮಗನೆ.
 ಹೆತ್ತವರಿಗೆ ಹೆಗ್ಗಣ ಮುದ್ದು.
 ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
 ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
 ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
 ಮನಸಿದ್ದರೆ ಮಾರ್ಗ.
ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
ತುಂಬಿದ ಕೊಡ ತುಳುಕುವುದಿಲ್ಲ.
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.


All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 12,167