Posted by: sundaranadu on: August 1, 2010
ಎಲ್ಲೋ ಹೊರಡಲು ನಿಂತಿರುವೆ
ನಿಂತು ಯಾರಿಗೋ ಕಾಯುತಿರುವೆ
ಎಲ್ಲಿಗೆ ಹೋಗುವುದು ತಿಳಿಯದಾಗಿದೆ
ಜೊತೆಗೆ ಬರುವವರು ಯಾರೋ?
ನೋವು-ನಲಿವಿನ ಬುತ್ತಿಯುಂಟು
ಆಲಸ್ಯ-ಅನುಭವದ ಗಂಟು ಉಂಟು
ಅನುಭವದ ಗಂಟು ಹೊರುವುದು ಹೇಗೊತಿಳಿಯದಾಗಿದೆ
ನೋವು ಆಲಸ್ಯಗಳ ಗಂಟನ್ನಿಳಿಸುವರಾರೋ?
ಗಾಢ ಅಂಧಕಾರದ ಊರಲಿ
ಬೆಳಕ ನೀಡಲು ಬೇಕಿದೆ ದೀವಿಗೆ
ಗುರಿಯ ಮುಟ್ಟಲು ಬೇಕಿದೆ ದಾರಿ
ಕೈಯ ಹಿಡಿದು ನಡೆಸೊ ಗುರುವು ಬೇಕಿದೆ
January 12, 2011 at 2:53 pm
ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು
ಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನ
ಹಾಸ್ಯ ಅಂತ ತಿಳ್ಕೊಂಡಿದ್ದೆ
ದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!
ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆ
ವಸುಂಧರೆ ತಾಯಿ ನೀನು
ಬೀಜ ಹಾಕಿದ್ರೆ ಮರ ಮಾಡ್ತಿ
ನಾಣ್ಯವೊಂದ ಬಿತ್ತುತ್ತೀನಿ
ದುಡ್ಡಿನ ಗಿಡ ಮಾಡ್ತೀಯಾ?
ಜೀವಕ್ ಬೇಕಾದ್ ಅನ್ನ, ನೀರು
ಎಲ್ಲಾ ನೀನೆ ಕೊಡ್ತೀಯಾ
ಜೀವನ ಸಾಗಿಸೋಕ್ ಬೇಕೀ ದುಡ್ಡು
ಇನ್ನೂ ಯಾಕೆ ಕೊಟ್ಟಿಲ್ಲ?
ನಾಣ್ಯಕ್ ಜೀವ ಕೊಟ್ಟು ನೋಡು
ಬಿತ್ತಿ ಪ್ರಯತ್ನ ಮಾಡ್ತೀನಿ!
ದುಡ್ಡಿನ ಗಿಡ ಬಂದ್ರೆ ಸಾಕು
ಬಡವರ ಸಮಸ್ಯೆ ಪರಿಹರಿಸ್ತೀನಿ.
ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು.