ಅಭಿಮಾನಿ

ಗುರು ಮತ್ತು ದಾರಿ

Posted by: sundaranadu on: August 1, 2010

ಎಲ್ಲೋ ಹೊರಡಲು ನಿಂತಿರುವೆ

ನಿಂತು ಯಾರಿಗೋ ಕಾಯುತಿರುವೆ

ಎಲ್ಲಿಗೆ ಹೋಗುವುದು ತಿಳಿಯದಾಗಿದೆ

ಜೊತೆಗೆ ಬರುವವರು ಯಾರೋ?

ನೋವು-ನಲಿವಿನ ಬುತ್ತಿಯುಂಟು

ಆಲಸ್ಯ-ಅನುಭವದ ಗಂಟು ಉಂಟು

ಅನುಭವದ ಗಂಟು ಹೊರುವುದು ಹೇಗೊತಿಳಿಯದಾಗಿದೆ

ನೋವು ಆಲಸ್ಯಗಳ ಗಂಟನ್ನಿಳಿಸುವರಾರೋ?

ಗಾಢ ಅಂಧಕಾರದ ಊರಲಿ

ಬೆಳಕ ನೀಡಲು ಬೇಕಿದೆ ದೀವಿಗೆ

ಗುರಿಯ ಮುಟ್ಟಲು ಬೇಕಿದೆ ದಾರಿ

ಕೈಯ ಹಿಡಿದು ನಡೆಸೊ ಗುರುವು ಬೇಕಿದೆ

1 Response to "ಗುರು ಮತ್ತು ದಾರಿ"

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು

ಚಿಕ್ಕ ವಯಸ್ನಲ್ ಅಮ್ಮ ಹೇಳಿದ್ನ
ಹಾಸ್ಯ ಅಂತ ತಿಳ್ಕೊಂಡಿದ್ದೆ
ದುಡ್ಡೂ ಕೂಡ ಹಾಳೆಯಂತೆ! ಬೆಲ್ಲೆಯಂತೆ!
ಹೇಗೆ ಬೆಳೆಸೋದ್ ಅಂದ್ಕೊಂಡಿದ್ದೆ

ವಸುಂಧರೆ ತಾಯಿ ನೀನು
ಬೀಜ ಹಾಕಿದ್ರೆ ಮರ ಮಾಡ್ತಿ
ನಾಣ್ಯವೊಂದ ಬಿತ್ತುತ್ತೀನಿ
ದುಡ್ಡಿನ ಗಿಡ ಮಾಡ್ತೀಯಾ?

ಜೀವಕ್ ಬೇಕಾದ್ ಅನ್ನ, ನೀರು
ಎಲ್ಲಾ ನೀನೆ ಕೊಡ್ತೀಯಾ
ಜೀವನ ಸಾಗಿಸೋಕ್ ಬೇಕೀ ದುಡ್ಡು
ಇನ್ನೂ ಯಾಕೆ ಕೊಟ್ಟಿಲ್ಲ?

ನಾಣ್ಯಕ್ ಜೀವ ಕೊಟ್ಟು ನೋಡು
ಬಿತ್ತಿ ಪ್ರಯತ್ನ ಮಾಡ್ತೀನಿ!
ದುಡ್ಡಿನ ಗಿಡ ಬಂದ್ರೆ ಸಾಕು
ಬಡವರ ಸಮಸ್ಯೆ ಪರಿಹರಿಸ್ತೀನಿ.

ನನಗೆ ಈಗ ಅನ್ನಿಸ್ತಿದೆ
ದುಡ್ಡಿನ ಗಿಡ ಇರಬೇಕಿತ್ತು!
ನನಗೆ ಬಂದ ಸಮಸ್ಯೆಗೆ
ದುಡ್ಡೇ ಉತ್ತರ ಕೊಡಬೇಕಿತ್ತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s

All articles, poems and writings are written by myself (Sundaranadu) except Kannada SMS and Proverbs. ಇಲ್ಲಿ ಬರೆದಿರುವ ಎಲ್ಲ ಲೇಖನಗಳು, ಕವಿತೆಗಳು, ಬರಹಗಳು (ಕನ್ನಡ ಗಾದೆಗಳು ಮತ್ತು ಏಸ್ಸೆಮ್ಮೆಸ್ಸು ಹೊರತುಪಡಿಸಿ) ನನ್ನ (ಸುಂದರನಾಡು) ಸ್ವಂತದ್ದಾಗಿವೆ. ಸುಂದರನಾಡಿಗೆ ಬಂದು ಹೋದವರು Locations of visitors to this page

ಸುಂದರನಾಡಿನ ಅತಿಥಿಗಳು

  • 76,624
Follow

Get every new post delivered to your Inbox.

Join 31 other followers