Posted by: sundaranadu on: July 29, 2008
ಶುಕ್ರವಾರ,ದಿನಾಂಕ: 25/07/2008, ಬೆಂಗಳೂರಿನ, ಕರ್ನಾಟಕದ ಇತಿಹಾಸದಲ್ಲಿಯೇ
ಮೊದಲ ಸರಣಿ ಬಾಂಬ್ ಸ್ಪೋಟ ದಾಖಲದ ದಿನ. ಒಂದು ಸಾವಿನೊಂದಿಗೆ,ಕೆಲವು
ಜನ ಗಾಯಗೊಂಡರು. ಇಡೀ ದೇಶಕ್ಕೆ ಇದ್ದಕ್ಕಿದ್ದ ಹಾಗೆ ದಿಗ್ಬ್ರಮೆಯಾಯಿತು.
ವಾರಾಂತ್ಯದ ‘ಮಜ’ ಅನುಭವಿಸಲು ಸಿದ್ಧರಾದವರಿಗೆ ಆಘಾತ. ಕಾಡ್ಗಿಚ್ಚಿನಂತೆ
ಹರಡುತ್ತಿದ್ದ ವದಂತಿಗಳು. ಜನರನ್ನು ಎಚ್ಚರಗೊಳಿಸುವತ್ತ ಮಾಧ್ಯಮಗಳು.
ಅನುಮಾನಾಸ್ಪದವಾಗಿ ಕಂಡು ಬರುವಂತಹ ವಸ್ತುಗಳನ್ನು ಪೊಲೀಸರ
ಗಮನಕ್ಕೆ ತರಬೇಕೆಂದು ಪೊಲೀಸರ, ಮಾಧ್ಯಮದವರ ಮನವಿಯಾಗಿತ್ತು.
ಶನಿವಾರ,ದಿನಾಂಕ: 26/07/2008, ಬೆಂಗಳೂರು ಶುಕ್ರವಾರದ ಘಟನೆಯ
ನಂತರ ಸಹಜ ಸ್ಥಿತಿಗೆ ಮರಳುತ್ತಿತ್ತು. ಕೋರಮಂಗಲದ ‘ಫೋರಮ್ ಮಾಲ್’ ಬಳಿ
ಅಸಹಜವಾದ ವಸ್ತುವೊಂದು ಕಂಡು ಬಂತು. ಅಲ್ಲಿನ ಹತ್ತಿರದ ಅಂಗಡಿಯವನು
ಪೊಲೀಸರಿಗೆ ವಿಷಯ ತಿಳಿಸಲು, ಪೊಲೀಸರು [...]
Posted by: sundaranadu on: July 21, 2008
ಕರೆಂಟಿಲ್ಲದೇ ಶಾಕ್ ಹೊಡೆದರೆ ಹೇಗಿರುತ್ತೆ? ಇದೇನು ವಿಚಿತ್ರ ಅನ್ನಬಹುದು. ಈಗ ಕರ್ನಾಟಕದಲ್ಲಿರೋ ಬಹುಪಾಲು
ಜನರಿಗೆ ಇದರ ಅನುಭವ ಆಗಿರಬೇಕು. ಪ್ರತಿದಿನ ಕರೆಂಟ್ (ಪವರ್) ಇಲ್ಲದೇ ಅನುಭವಿಸುತ್ತಿರುವ ಶಾಕ್ ಇದು.
ವರ್ಷದಿಂದ ವರ್ಷಕ್ಕೆ ಮಳೆ ಪ್ರಮಾಣ ಕಡಿಮೆ ಆಗ್ತಾ ಇದೆ. ಮಳೆ ಕಡಿಮೆ ಆದರೆ, ಅಣೆಕಟ್ಟುಗಳಲ್ಲಿಯೂ ನೀರು
ಇರೋದಿಲ್ಲ. ಇದರಿಂದ ಕುಡಿಯೊ ನೀರಿಗೆ, ವ್ಯವಸಾಯಕ್ಕೆ ಮತ್ತು ವಿದ್ಯುತ್ ಉತ್ಪಾದನೆಗೆ, ಎಲ್ಲದಕ್ಕೂ ಕಷ್ಟ.
ಪ್ರತಿದಿನ ಲೆಕ್ಕವಿಲ್ಲದೇ ನಾವು ವ್ಯರ್ಥ ಮಾಡೋ ನೀರು ಮತ್ತು ವಿದ್ಯುತ್ತಿನ ಬೆಲೆ ಈಗ ಎಲ್ಲರಿಗೂ
ಗೊತ್ತಾಗಿರಬೇಕು. ಕೆಲವರಿಗೆ ಇದರ ಅರಿವಿದ್ದರು, ತಿಂಗಳಿಗೆ ಸರಿಯಾಗಿ ಬಿಲ್ ಮಾತ್ರ ಕಟ್ಟುತ್ತಾರೆ,
ಮತ್ತೆ ಬೇಕಾಬಿಟ್ಟಿ ನೀರು, ವಿದ್ಯುತ್ ಬಳಸುತ್ತಾರೆ.
ಒಂದು ಅಂದಾಜಿನ ಪ್ರಕಾರ, ನಮ್ಮ ರಾಜ್ಯದ ಜಲಾಶಯಗಳಲ್ಲಿ ಕೇವಲ ಕೆಲವೇ ದಿನಗಳಿಗಾಗುವಷ್ಟು ನೀರು
ಮಾತ್ರ ಇದೆ. ಅನಂತರ ನೀರು, ವಿದ್ಯುತ್ ಎರಡು ಇಲ್ಲ. ನಮ್ಮ ರೈತರ ಜಮೀನಿನ ಬೆಳೆಯ ನೀರು
ಬೆಂಗಳೂರಂತ ನಗರಗಳಿಗೆ ಕುಡಿಯಲು ನೀಡಲಾಗುತ್ತಿದೆ. ಇದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಹಾಗಾಗಿ
ನೀರಿನ ಮೂಲಗಳ ರಕ್ಷಣೆ, ಕೆರೆಗಳ ಒತ್ತುವರಿ ತಪ್ಪಿಸುವುದು, ಮಳೆ ಕೊಯ್ಲು, ಮರಗಳ ರಕ್ಷಣೆ, ಮಿತವಾಗಿ
ನೀರು ಮತ್ತು ವಿದ್ಯುತ್ ಬಳಸುವುದು ನಮ್ಮೆಲ್ಲರ ಕರ್ತವ್ಯ. ಮುಂದಿನ ಪೀಳಿಗೆಗಾಗಿ ನೀರು ಉಳಿಸೋಣ.
Posted by: sundaranadu on: May 6, 2008
ವೇದ ಸುಳ್ಳಾದರು ಗಾದೆ ಸುಳ್ಳಾಗದು.
ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಎತ್ತು ಏರಿಗೆಳೀತು, ಕೋಣ ನೀರಿಗೆಳೀತು.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ.
ಕೈ ಕೆಸರಾದರೆ ಬಾಯಿ ಮೊಸರು.
ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತ?
ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು.
ಮಾತು ಬೆಳ್ಳಿ, ಮೌನ ಬಂಗಾರ.
ಮಾತು ಮನೆ ಮುರಿತು, ತೂತು ಓಲೆ ಕೆಡಿಸಿತು.
ಮಂಗ ಮೊಸರು ತಿಂದು ಮೇಕೆ ಬಾಯಿಗೆ ಸವರಿದ ಹಾಗಾಯಿತು.
ಮನೆಗೆ ಮಾರಿ, ಊರಿಗೆ ಉಪಕಾರಿ.
ಆಳಾಗಬಲ್ಲವನು ಅರಸನಾಗಬಲ್ಲ.
ಊರಿಗೆ ದೊರೆ ಆದರೂ ತಾಯಿಗೆ ಮಗನೆ.
ಹೆತ್ತವರಿಗೆ ಹೆಗ್ಗಣ ಮುದ್ದು.
ಊರೆಲ್ಲ ದೋಚಿಕೊಂಡು ಹೋದಮೇಲೆ ದೊಡ್ಡಿ (ಕೋಟೆ) ಬಾಗಿಲು ಹಾಕಿದರಂತೆ.
ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?
ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.
ಮನಸಿದ್ದರೆ ಮಾರ್ಗ.
ಅಡ್ಡಗೋಡೆಯ ಮೇಲೆ ದೀಪ ಇಟ್ಟ ಹಾಗೆ.
ಆರಕ್ಕೇರಲಿಲ್ಲ, ಮೂರಕ್ಕೀಳಿಯಲಿಲ್ಲ.
ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.
ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಇಷ್ಟ.
ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡಂತೆ.
ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ.
ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ.
ಬೆಳ್ಳಗಿರೋದೆಲ್ಲ ಹಾಲಲ್ಲ, ಹೊಳೆಯೋದೆಲ್ಲ ಚಿನ್ನ ಅಲ್ಲ.
ಹತ್ತು ಕಟ್ಟೋ ಕಡೆ ಒಂದು ಮುತ್ತು ಕಟ್ಟು.
ಜಲ ಶೋಧಿಸಿ ನೀರು ತರ್ಬೇಕು, ಕುಲ ಶೋಧಿಸಿ ಹೆಣ್ಣು ತರ್ಬೇಕು.
ಚಿಂತೆ ಇಲ್ಲದವನಿಗೆ ಸನ್ತೇಲು ನಿದ್ದೆ.
ದೇವರು ವರ ಕೊಟ್ಟರು ಪೂಜಾರಿ ಕೊಡೆಬೇಕಲ್ಲ.
ಹನುಮಂತಾನೆ ಬಾಲ ಕಡಿತಿರುವಾಗ, ಇವನ್ಯಾವನೋ ಶಾವಿಗೆ ಕೇಳಿದನಂತೆ.
ತುಂಬಿದ ಕೊಡ ತುಳುಕುವುದಿಲ್ಲ.
ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ.
ಹನಿ ಹನಿ ಸೇರಿದರೆ ಹಳ್ಳ, ತೆನೆ ತೆನೆ ಸೇರಿದರೆ ಬಳ್ಳ.
ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು.
ಹುಚ್ಚರ ಮದುವೆಯಲ್ಲಿ ಉನ್ಡೋನೆ ಜಾಣ.
ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.
Posted by: sundaranadu on: June 7, 2007
Karnataka is the state in which you will find one or the other tourist place in each district which are historically, religiously, or by some other reason are important to visit. Let us have a glance at the ‘KARNATAKA’.
Karnataka is the southern state of India. Karnataka covers 1,91,791 Sq. Km of area with population around [...]
ಅಭಿಪ್ರಾಯಗಳು