ನೂರು ಊರು ಸುತ್ತಿದರೂ
ನೂರು ದಾನ ಮಾಡಿದರೂ
ಸಿಗಲಿಲ್ಲ ಪುಣ್ಯ
ನಿನ್ನ ಕೈ ಹಿಡಿದ ಮಾತ್ರಕೆ
ನಾನಾಗುವೆ ಧನ್ಯ
ಕನಕ, ಪುರಂದರ ಹಾಡಿದರೂ
ರವಿವರ್ಮನ ಕಲೆ ಮೆರೆದರೂ
ಸವಿಯಲಾಗಲಿಲ್ಲ ಸವಿಯ
ನಿನ್ನ ಕಂಡ ಮಾತ್ರಕೆ
ಹರಿವುದು ಪ್ರೇಮಕಾವ್ಯ
ಹುಟ್ಟಿನಿಂದಲೂ ಜಗವ ಕಂಡರೇನೂ
ಕೀರ್ತಿಶಿಖರದಲಿ ಕುಳಿತು ಮರೆದರೇನೂ
ಸರಿಸಾಟಿಯಾಗುವುದೇ
ನೀ ಧಾರೆ ಎರೆವ ಪ್ರೀತಿಗೆ
ಕಣ್–ಮನ ಸೆಳೆವ ನಿನ್ನ ಕುಡಿ ನೋಟಕೆ