ಅಭಿಮಾನಿ

ನಾ ನಿಮಗೆ…


1 ಟಿಪ್ಪಣಿ

ಪ್ರಿಯ ಹೃದಯವೇ ನೀನು ಓದದ ಕೊನೆಯ ಪತ್ರ

ಹಾಯ್ ಲಿಲ್ಲಿ,
ನಾನು ಬರೆಯೋದನ್ನ ನಿಲ್ಲಿಸೋ ಕಾಲ ಬಂದಿದೆ ಅನ್ನಿಸುತ್ತೆಅಷ್ಟಕ್ಕೂ ನಾನು ಏನು ಬರೆದಿಲ್ಲ
ನಿನಗೆ ಒಂದು ಪತ್ರವನ್ನು ಬಿಟ್ಟುಅದನ್ನು ನಾನು ಕೊಡದೇ ಇಟ್ಟುಕೊಂಡುಬಿಟ್ಟೆ (ನಿನಗೆ ಕೊಡಲು ಹೆದರಿಕೆಯಾಗಿ). 
ಹೋಗಲಿ ಬಿಡುನಾನು ಈಗ ಬರೆಯೋ ಕಾಗದ ಕೂಡ ನಿನಗೆ ತಲುಪದೇ ಇರಬಹುದುನಾನು
ನಿನ್ನ ತಲುಪದೇ ಇರೋ ಹಾಗೆಮನಸ್ಸಿನಲ್ಲಿರೋ ಪ್ರೀತಿ ನಿನಗೆ ಅರ್ಥ ಆಗುತ್ತಾ ಅನ್ನೋದೇ
ನನಗಿರುವ ಸಂಶಯಇಷ್ಟು ಕಾಲ ನಿನ್ನ ಹೆಸರಿನಲ್ಲೇ ಕೆಲವು ಸಾಲುಗಳನ್ನ ಬರೆಯುತ್ತಿದ್ದೆಅದಕ್ಕೆ
ಕೆಲವೊಂದು ಸಲ ಪದ್ಯ ಎನ್ನುತ್ತಿದ್ದೆಕೆಲವೊಂದು ಸಲ ಗದ್ಯ ಎನ್ನುತ್ತಿದ್ದೆಮುಂದೆ ಏನೆಂದು ಹೇಳುವುದು?
ನೀನು ನನ್ನ ಬಿಟ್ಟು ಹೊರಟು ನಿಂತಿದ್ದೀಯನನ್ನಲ್ಲಿರುವ ಕೆಲವು ಸಾಲುಗಳು ಹೊರಬರುತ್ತಿವೆಇವೆ ಕೊನೆಯ
ಸಾಲುಗಳೇನೋಬಹುಶಃ ನಿನಗೆ ಅನ್ನಿಸಿರಬಹುದು ನನ್ನಲ್ಲಿ ಪ್ರೀತಿಯೆಂಬುದು ಬಾರಿ ಆಕರ್ಷಣೆಯಾಗಿತ್ತು
 
ಮತ್ತು ಅದೀಗ ಸತ್ತು ಹೋಗಿದೆಯೆಂದುನಿಜ ಹೇಳ್ತೀನೇಲಿಲ್ಲಿಅದು ಸಾಯುವ ಕೂಸಲ್ಲಅದು ಬಂಡೆಗಲ್ಲು
ಒಡೆದರೆ ಚೂರಾಗಿ ಮಣ್ಣಾಗುವುದುನೆಲದ ಮೇಲೋನೀರಿನ ಕೆಳಗೋ ಇದ್ಡುಬಿಡುತ್ತೆಅದರ
ಪಾಡಿಗೆ ಅದು.

ನಾನು ನಿನಗೆ ಇಷ್ಟ ಆಗಿಲ್ಲ ಅನ್ನೋದು ನನಗೆ ಗೊತ್ತುಯಾಕೆಂದರೆ ನಿನ್ನಲ್ಲಿರುವ ಹಣಗುಣರೂಪ
ಯಾವುದು ನನ್ನಲ್ಲಿಲ್ಲನಿನಗೆ ಇಷ್ಟವಾಗೋ ಹುಡುಗ ಹೇಗಿರಬೇಕು ಅನ್ನೋದು ನನಗೆ ಗೊತ್ತಿಲ್ಲನಿನ್ನ ತಂದೆ 
ತಾಯಿ ತೋರಿಸಿದ ಹುಡುಗನನ್ನೇ ನಿನ್ನ ತಮ್ಮನಿಗೆ ಭಾವನನ್ನಾಗಿ ಮಾಡುತ್ತೀಯೆಂದು ನನಗೆ ಗೊತ್ತುಅದೆಲ್ಲ
ಹಾಳಗಿ ಹೋಗಲಿ ಬಿಡುಒಟ್ಟಾರೆ ನೀನು ನನ್ನನ್ನ ಮರೆತುಮತ್ತೆಂದೂ ಕಾಣಿಸಿಕೊಳ್ಳದಂತೆ ಸಂತೋಷವಾಗಿ
 
ಹೋಗುತ್ತಿದ್ದೀಯನಾನು ನಿಸ್ವಾರ್ಥ ಪ್ರೇಮಿಯಾಗಬೇಕೆಂದಿದ್ದೆಆದರೆ ನಿನ್ನ ಪ್ರೀತಿ ಹಮ್ಬಲಿಸಿ ಸ್ವಾರ್ಥಿಯಾದೆ.

ನಿನ್ನ ಆಸೆಕನಸುಗಳು ಚಿರಾಯುವಾಗಲಿನನ್ನ ಪ್ರೀತಿ ಸಾಯದಿರಲಿ.

ಕೊನೆಗೊಳ್ಳದ ಪ್ರೀತಿಯಿಂದ
ರಾಜ್



ನಿಮ್ಮ ಟಿಪ್ಪಣಿ ಬರೆಯಿರಿ

ದೇವರು ಮತ್ತು ಪುಸ್ತಕ

ನಾನು ಪುಸ್ತಕ
ಆ ದೇವ ಲೇಖಕ
ಬರೆಯುತ್ತ ಅವನಿಗೆ ದಣಿವಾಗಲಿಲ್ಲ
ಅವನಿಗೆ ಒಂದೇ ಪುಸ್ತಕವಲ್ಲ…
ಅವನು ಬರೆದದ್ದು
ಮುಂದೆ ಬರೆಯುವುದು
ಎಲ್ಲ ಅವನಿಗೆ ಗೊತ್ತಂತೆ
ಅವನು ಏನೆಲ್ಲಾ ಬರೆದ ಎಂದು
ಈಗ ನನಗೂ ಗೊತ್ತಾಗಿದೆ

ಅವನು ಬರೆದ ಪುಟಗಳಲ್ಲಿ
ಯಾರ್ಯಾರೋ ಬಂದು reffer  ಮಾಡಿದರು
ನನ್ನ ಸಾಲುಗಳನ್ನ ತಮ್ಮ ಸಂಗದಿಂದ
ಗೀಚಿ ಹೋದರು
ನೆನಪುಗಳು ಅಲ್ಲಿ ಮಾಸದೆ ಉಳಿದವು
ಕೆಲವರು ಬಂದ ಮೇಲೆ
ಹಾಳೆಗಳು ಹರಿದವು
ಕೆಲವು ಗೆದ್ದಲಿಗೆ ಮೃಷ್ಟಾನ್ನ ಭೋಜನವಾಯಿತು
ನನ್ನ ನೆನಪುಗಳ ಕೆದಕಲು
ಬುಕ್ಮಾರ್ಕರ್ಗಳು ಹತ್ತೆಂಟು ಉಂಟು

ಇಷ್ಟಾದರೂ ಮುಗಿಯಲಿಲ್ಲ
ಅವನ ಬರವಣಿಗೆ
ಲೇಖನಿಯ ಇಂಕಿನ ಜೋರಿನ ಮೆರವಣಿಗೆ
ಈ ಪುಸ್ತಕದ ಮುನ್ನುಡಿ…
ಬರವಣಿಗೆ ಮುಗಿದ ಮೇಲೆ
ವಿಮರ್ಶೆ- ಟೀಕೆ ಯಾರದೋ?


ನಿಮ್ಮ ಟಿಪ್ಪಣಿ ಬರೆಯಿರಿ

ನಿಮಗೆ ಧನ್ಯವಾದಗಳು

ಈ ಚಳಿಗಾಲದಲ್ಲಿ ಮೈ ಸ್ವಲ್ಪ ಚುರುಕು ಕಡಿಮೆ. ಅದರಲ್ಲಿಯೂ ನನ್ನಂಥ ಸೋಮಾರಿಗಳಿಗೆ ಸ್ವಲ್ಪ ಜಾಸ್ತಿನೆ. ಬೆಳಿಗ್ಗೆ ಎದ್ದು ರೆಡಿಯಾಗಿ ತಿಂಡಿಗೆ ಹೊರಡುವ ವೇಳೆಗೆ ಜನರೆಲ್ಲ ಆಫೀಸಿನಲ್ಲಿ ಕೆಲ್ಸಕ್ಕೆ ಹಾಜರಾಗಿರುತ್ತಾರೆ,  ಆಗ್ತಿರ್ತಾರೆ. ಅಂದರೆ ಬೆಳಿಗ್ಗೆ ೯ ಅಥವಾ ೧೦ ಗಂಟೆಗೆ.
ನಾನು ಕನ್ನಡ ದಿನಪತ್ರಿಕೆಗಳು ಹಾಗು ಬ್ಲಾಗುಗಳನ್ನು ನೋಡುತ್ತಲೇ ಇರುತ್ತೀನಿ. ಈಗ ಅದು ಗೀಳು ಅಥವಾ ತುಂಬ ಅಭ್ಯಾಸ ಆಗಿ ಹೋಗಿದೆ. ಯಾವುದಾದರು ಹಬ್ಬಗಳು ಬಂದಾಗ, ಭಾರತ ಯಾವುದಾದರು ಕ್ರೀಡೆಯಲ್ಲಿ ಜಯಗಲಿಸಿದಾಗ, ಯಾರಾದರು ಮೃತರಾದಾಗ ವಿಶೇಷವಾದ ಲೇಖನಗಳು ಪುಂಖಾನುಪುಂಖವಾಗಿ ಬರುತ್ತವೆ. ಬ್ಲಾಗುಗಳಲ್ಲಿಯು ಕೂಡ. ನನಗೆ ಆಶ್ಚರ್ಯ ಅಗೋ ಸಂಗತಿಯೆಂದರೆ ಪತ್ರಕರ್ತರೇನೊ ಸದಾ ಸುದ್ದಿಯ ಸಂಗ್ರಹದಲ್ಲಿರುತ್ತಾರೆ. ಅವರಿಗೆ ಲೇಖನಗಳನ್ನು ಬರೆಯೋದು ಕಷ್ಟದ ಕೆಲಸವಾಗಿರಲಾರದು. ಆದರೆ ಬ್ಲಾಗಿಗರು ಅದು ಹೇಗೆ ಲೇಖನಗಳನ್ನ ಬರೆಯುತ್ತಾರೆ. ಏಕೆಂದರೆ ಅದರಲ್ಲಿ ಬರೆಯುವ ಬಹಳಷ್ಟು ಮಂದಿ ಹವ್ಯಾಸಿ ಬರಹಗಾರರೆಂದು ನನ್ನ ಅಭಿಪ್ರಾಯ. ಅವರಿಗೆ ಈ ಸಂದರ್ಭಗಳಲ್ಲಿ ಹೇಗೆ ಸಮಯ ಸಿಗುತ್ತದೆಂದು? ನಾನು ಹವ್ಯಾಸಕ್ಕಾಗಿ ಬರೆಯುತ್ತೇನೆ. ಆದರೆ ಬರಹಗಾರನಲ್ಲವೆಂದು ನಿಮಗೆ ಇದು ಓದುತ್ತಲೇ ತಿಳಿಯುತ್ತದೆ.
ಅವಧಿ, ನವಿಲಗರಿ, ಚಂಡೆಮದ್ದಳೆ, ಕೆನೆಕಾಫಿ, ಕುಂದಾಪ್ರಕನ್ನಡ, ಹಾಗು ಇತರೆ ಕನ್ನಡ ಬ್ಲಾಗುಗಳು ಸದಾ ಹೊಸ ವಿಚಾರಗಳಿಗೆ ತೆರೆದುಕೊಂದಿರುತ್ತವೆ, ಹೊಸ ರೀತಿಯಲ್ಲಿ ಬರೆಯುತ್ತಲೇ ಇರುತ್ತವೆ. ನಮ್ಮ ಬಾಲ್ಯದ ನೆನಪುಗಳನ್ನ, ಮನಸ್ಸಿನ ಕಸಿವಿಸಿ, ಕನಸು, ಕೋಪ-ತಾಪ ಎಲ್ಲವು ನಮ್ಮಲ್ಲಿ ಕೆಲವೊಮ್ಮೆ ವ್ಯಕ್ತವಾದರೂ ಅವೆಲ್ಲ ಹೇಗೆ ಅಕ್ಷರ ರೂಪ ಪಡೆದು ಈ ಬ್ಲಾಗುಗಳಲ್ಲಿ ಬಂದಿವೆ ಎಂದು ನನಗೆ ಅಚ್ಚರಿಯಾಯ್ತು.
ಈ ನನ್ನ ಮಾತುಗಳು ಭಾವವನ್ನು ಅಕ್ಷರಗಳಿಗೆ ಇಳಿಸಿದ ಅಕ್ಷರಬ್ರಹ್ಮರಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳನ್ನು ಸಲ್ಲಿಸುವುದಕ್ಕಾಗಿ ಬರೆದದ್ದು. ಆದರೆ ಹೇಗೆ ಬರೆದಿದ್ದೆನೆಂದು ನನಗೆ ಗೊತ್ತಿಲ್ಲ. ನನ್ನ ಭಾವ ನಿಮ್ಮ ತಲುಪಿದರೆ ಅಷ್ಟೆ ಸಾಕು.

ನಿಮ್ಮ ಅಭಿಮಾನಿ


6 ಟಿಪ್ಪಣಿಗಳು

ಕಲ್ಲು ಹೃದಯವಾಯಿತೆ

ಕಲ್ಲು ಹೃದಯವಾಯಿತೆ?
ನಿನ್ನದು ನನ್ನ ಪ್ರೀತಿಗೆ
ನೀರ ಗುಳ್ಳೆಯಾಯಿತೆ ನನ್ನ ಪ್ರೀತಿ
ಕ್ಷಣ ಕಾಲವು ಉಳಿಯಲಿಲ್ಲ
ಮೂಡಿದಂತೆ ಭಾವಿಸುತಿರಲು
ಹೆಸರಿಲ್ಲದಂತೆ ಅಳಿಸೋಯಿತಲ್ಲ

ಬಂಡೆಯೊಳಗಿನ ಅಗ್ನಿ ಮಾಡಿ
ಕಾಪಾಡಿದ್ದೆ ನನ್ನ ಪ್ರೀತಿ
ಹೃದಯದ ಒಳಗೆ ಇಟ್ಟು
ಹಗಲು ರಾತ್ರಿ ಕಾದಿದ್ದೆ ನನ್ನ ಪ್ರೀತಿ

ಚೂರು ಮಾಡಿದೆಯಲ್ಲೇ ಈ ಹೃದಯ
ಆರದೆ ಉಳಿಯಿತಲ್ಲೆ ಈ ಗಾಯ
ನೋವಿದೆ ಮನದಲಿ
ನನ್ನ ಕಾಡುತ ಹಗಲಿರುಳು

ಎಲ್ಲಿಯಾದರೂ ಇರಲಿ ನೀನು
ನಿನ್ನ ಸುಖವೊಂದೆ ನನಗೆ ಸಾಕು
ನಿನ್ನ ಒಳಿತಿಗಾಗಿಯೇ ಈ ಪ್ರೀತಿ
ದೇವನಾಡುತ ಕುಳಿತನು ನೋಡುತ ಈ ರೀತಿ